ಮರ್ಮ

ಅದೊಂದು ಮರ ಬೃಹದಾಕಾರ
ರೆಂಬೆ-ಕೊಂಬೆಗಳಿಂದ
ಸೊಂಪಾಗಿ,
ಬೇರುಗಳ ಜೊತೆ ಬೀಳಲುಗಳು
ನೆಲ ತಬ್ಬಿ,
ಎಲೆ ಕಾಯಿ ಹಣ್ಣು
ಸಮೃದ್ಧ ತುಳುಕಾಡಿ
ಆತಿಥ್ಯಕ್ಕೆ ಎತ್ತಿದ ಕೈ
ಆಶ್ರಯಿಸಿ ಬಂದರೆ
ಬುಡಕೆ ಆಧರಿಸಿ
ನೆರಳು ನೀಡುವುದು ಮುದದಿಂದ.
ಅದಕ್ಕೆ ಮರದ ಕೊಂಬೆಗಳಲ್ಲಿ
ಪೊಟರೆಗಳಲ್ಲಿ
ಚಿಲಿಪಿಲಿ, ಕಚಪಿಚ ಸರ್ವಕಾಲಕ್ಕೂ
ಆದರೆ,
ಮರದ ಬುಡದಿ ಬೆಳೆಯ ಹೊರಟರೆ
ಚಿಗುರು ಗಿಡವಾಗಿ
ಸಹಿಸಲಾಗದು ಅದಕ್ಕೆ
ಮಣ್ಣ ಸತ್ವವನ್ನೆಲ್ಲಾ
ತನ್ನ ಕಬಂಧ ಬಾಹುಗಳಲಿ
ಹೀರಿ ಬಿಟ್ಟುಬಿಡದೆ
ಪೀಚಲಾಗಿಸುವುದು
ಮರಿಗಿಡವ-ಮದದಿಂದ
ಅರಿಯಬೇಕಿದೆ ಈ ಒಳ ಮರ್ಮ
ದೊಡ್ಡ ದೊಡ್ಡ ಮರಗಳ ಧರ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸ್ತೆ ಹೋಗುವುದೆಲ್ಲಿಗೆ?
Next post ಕುಂಬಳೆ ಕೋಟೆ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys